ಬ್ಯಾಡಗಿ (ಹಾವೇರಿ ಜಿಲ್ಲೆ): ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದ ಶಿಕಾರಿಪುರ ಮೂಲದ ಆರು ಮಂದಿಯನ್ನು ತಾಲ್ಲೂಕಿನ ಮೋಟೆಬೆನ್ನೂರ ಬಳಿ ಬುಧವಾರ ಬಂಧಿಸಲಾಗಿದೆ.
ಬಂಧಿತರಿಂದ ನಾಡ ಬಂದೂಕು ಹಾಗೂ ಓಮ್ನಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿಯ ಶಿವಾನಾಯ್ಕ ಕಪ್ಪನಹಳ್ಳಿ (36). ಹುಲಿಗೇಶ ಮುನಿಯಪ್ಪ (34), ಅಣ್ಣಪ್ಪ ಶಾಂತಪ್ಪ (37), ಚಂದ್ರಪ್ಪ ಮಂಜಪ್ಪ (50) ಸಿದ್ದಪ್ಪ ಹೊಲ್ಲಪ್ಪ ಬಂಗಾರೆಪ್ಪ (45) ಮೂರ್ತಿ ನಾಗರಾಜಪ್ಪ (30) ಎಂದು ಗುರುತಿಸಲಾಗಿದೆ. ‘ಜಿಲ್ಲೆಯ ವಿವಿಧೆಡೆ ಜಿಂಕೆಯನ್ನು ಬೇಟೆಯಾಡುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ’ ಎಂದು ಸಿಪಿಐ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.