ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ಬೆಂಗಳೂರು– ಪುಣೆ ನಡುವೆ ಇದೇ 11ರಿಂದ ಕರೋನಾ ಸ್ಲೀಪರ್ ಬಸ್ ಸೇವೆ ಆರಂಭಿಸಲಿದೆ.
ಪ್ರಯಾಣದರ ₹ 1200. ಬಸ್ ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8 ಗಂಟೆಗೆ ಪುಣೆ ತಲುಪಲಿದೆ. ಪುಣೆಯಿಂದ ಸಂಜೆ 6ಕ್ಕೆ ಹೊರಟು ಮರುದಿನ ಬೆಳಿಗ್ಗೆ 8ಕ್ಕೆ ಬೆಂಗಳೂರು ತಲುಪಲಿದೆ.
ಕುಂದಾಪುರಕ್ಕೆ ಫ್ಲೈಬಸ್: ಸಂಸ್ಥೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಣಿಪಾಲ ನಡುವಿನ ಫ್ಲೈಬಸ್ ಸೇವೆಯನ್ನು ಕುಂದಾಪುರಕ್ಕೆ ಸೆ. 27ರಿಂದ ವಿಸ್ತರಿಸಲಿದೆ.
ಆಗಸ್ಟ್ 20ರಂದು ಮಣಿಪಾಲಕ್ಕೆ ಫ್ಲೈಬಸ್ ಸೇವೆ ಆರಂಭಿಸಲಾಗಿತ್ತು. ಈ ಬಸ್ ಹಾಸನ, ಮಂಗಳೂರು, ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ತಲುಪಲಿದೆ. ಪ್ರಯಾಣ ದರ ₹ 1150. ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 6.45ಕ್ಕೆ ಕುಂದಾಪುರ ತಲುಪಲಿದೆ. ರಾತ್ರಿ 7 ಗಂಟೆಗೆ ಕುಂದಾಪುರದಿಂದ ಹೊರಟು ಬೆಳಿಗ್ಗೆ 4.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 080– 49596666.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.