ಬೆಂಗಳೂರು: ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಬಿಜೆಪಿ ವರಿಷ್ಠರು ರಾಜ್ಯ ಮತಗಟ್ಟೆ ಸಮಿತಿ, ಸಾಂಪ್ರದಾಯಿಕ ಪ್ರಚಾರ ತಂಡ ಮತ್ತು ಸಾಮಾಜಿಕ ಜಾಲತಾಣಗಳ ಪ್ರಚಾರ ತಂಡ ರಚಿಸಿದ್ದಾರೆ.
ಸಾಂಪ್ರದಾಯಿಕ ಪ್ರಚಾರ ತಂಡದಲ್ಲಿ ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ವಿ.ಸೋಮಣ್ಣ, ಕುಮಾರ ಬಂಗಾರಪ್ಪ, ಶೃತಿ, ಜಗ್ಗೇಶ್, ಅಬ್ದುಲ್ ಅಜೀಮ್ ಪ್ರಮುಖರು.
ಮತಗಟ್ಟೆ ಸಮಿತಿಯಲ್ಲಿ ಬಿ.ಪಿ.ಅರುಣ ಕುಮಾರ್, ಎನ್.ರವಿಕುಮಾರ್, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲು, ವಿಶ್ವೇಶ್ವರ ಹೆಗಡೆ ಕಾಗೇರಿ, ಭಾನು ಪ್ರಕಾಶ್, ಡಾ,ಶಿವಯೋಗಿ ಸ್ವಾಮಿ, ಗಿರೀಶ್ ಪಟೇಲ್, ಎಂ.ಬಿ.ನಂದೀಶ್, ಎನ್.ವಿ.ಫಣೀಶ್, ಸಚ್ಚಿದಾನಂದಮೂರ್ತಿ ಇದ್ದಾರೆ.
ಸಾಮಾಜಿಕ ಜಾಲ ತಾಣ, ಡಿಜಿಟಲ್ ಮೀಡಿಯಾ ಪ್ರಚಾರ ತಂಡದಲ್ಲಿ ಎಸ್.ಎಂ.ಕೃಷ್ಣ, ಪ್ರಹ್ಲಾದ ಜೋಷಿ, ಅರವಿಂದ ಲಿಂಬಾವಳಿ, ಎಸ್.ಸುರೇಶ್ ಕುಮಾರ್, ಅನಂತಕುಮಾರ್ ಹೆಗಡೆ, ಪ್ರತಾಪ ಸಿಂಹ, ಭಗವಂತ ಖೂಬ, ತಾರಾ ಅನೂರಾಧ, ಕೆ.ಪಿ.ನಂಜುಂಡಿ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಶಂಕರ ಬಿದರಿ, ರಮೇಶ್, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.