ADVERTISEMENT

ರೈಲಿನ ಚಕ್ರಕ್ಕೆ ಸಿಲುಕಿ ತುಂಡಾದ ತಾಯಿ– ಮಗನ ಕಾಲು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ರೈಲಿನ ಚಕ್ರಕ್ಕೆ ಸಿಲುಕಿ ತುಂಡಾದ ತಾಯಿ– ಮಗನ ಕಾಲು
ರೈಲಿನ ಚಕ್ರಕ್ಕೆ ಸಿಲುಕಿ ತುಂಡಾದ ತಾಯಿ– ಮಗನ ಕಾಲು   

ಸಕಲೇಶಪುರ: ಇಲ್ಲಿನ ರೈಲು ನಿಲ್ದಾಣದಲ್ಲಿ ಮಂಗಳವಾರ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಮುಂದಾದ ತಾಯಿ ಹಾಗೂ ಮಗುವಿನ ಕಾಲುಗಳು ಚಕ್ರಕ್ಕೆ ಸಿಲುಕಿ ತುಂಡಾಗಿವೆ.

ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕುಡ್ಲ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಕಲೇಶಪುರಕ್ಕೆ ಬಂದು ಇಳಿದ ಬೆಂಗಳೂರಿನ ಬಿ.ಜಿ.ನಗರ ನಿವಾಸಿಗಳಾದ ಜಮೀನಾ ಹಾಗೂ ಪುತ್ರ ಮುಫೀಸ್‌ (2) ಕಾಲು ಕಳೆದುಕೊಂಡಿದ್ದಾರೆ. ‘ರೈಲು ನಿಲ್ಲುವುದಕ್ಕೂ ಮುನ್ನವೇ ಇಳಿಯಲು ಮುಂದಾದಾಗ ಕಾಲಿಗೆ ಬಟ್ಟೆ ಸಿಲುಕಿ ಜಾರಿ ಬಿದ್ದು ಅವಘಡ ಸಂಭವಿಸಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಇಬ್ಬರಿಗೂ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಯಿತು. ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.