ADVERTISEMENT

ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆ; ಧುಮ್ಮಿಕ್ಕುತ್ತಿದೆ ಗಗನಚುಕ್ಕಿ ಜಲಪಾತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 16:38 IST
Last Updated 18 ಜೂನ್ 2018, 16:38 IST
ಜಲ ಧಾರೆ ... ಮುಂಗಾರು ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್‌) ಬಳಿಯ ಗಗನಚುಕ್ಕಿ ಜಲಪಾತದಲ್ಲಿ ಸೋಮವಾರ ನೀರು ಧುಮ್ಮಿಕ್ಕಿ ಹರಿಯುತ್ತಿರುವುದು  ಪ್ರಜಾವಾಣಿ ಚಿತ್ರ: ಪುಟ್ಟಸ್ವಾಮಾರಾಧ್ಯ
ಜಲ ಧಾರೆ ... ಮುಂಗಾರು ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್‌) ಬಳಿಯ ಗಗನಚುಕ್ಕಿ ಜಲಪಾತದಲ್ಲಿ ಸೋಮವಾರ ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಪ್ರಜಾವಾಣಿ ಚಿತ್ರ: ಪುಟ್ಟಸ್ವಾಮಾರಾಧ್ಯ   

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ.

ವಿರಾಜಪೇಟೆಯಲ್ಲಿ 8 ಸೆಂ.ಮೀ ಮಳೆಯಾಗಿದ್ದು, ಭಾಗಮಂಡಲದಲ್ಲಿ 5, ಹೊನ್ನಾವರ, ಕಾರವಾರ, ಕ್ಯಾಸಲ್‌ ರಾಕ್‌ನಲ್ಲಿ 4, ಪುತ್ತೂರು, ಮಂಗಳೂರಿನಲ್ಲಿ 3, ಪಣಂಬೂರು, ಶಿರಾಲಿ, ಗೇರುಸೊಪ್ಪ, ಗೋಕರ್ಣ, ಕುಮಟಾ, ಪೊನ್ನಂಪೇಟೆ, ಹಾಸನ, ಕೊಟ್ಟಿಗೆಹಾರ 2, ಧರ್ಮಸ್ಥಳ, ಉಡುಪಿ, ಕುಂದಾಪುರ, ಕೋಟ, ‌ಸಿದ್ಧಾಪುರ, ಮಂಚಿಕೇರಿ, ಜಗಲ್ಬೇಟ್‌, ಮಡಿಕೇರಿ, ಸೋಮವಾರಪೇಟೆ, ಶೃಂಗೇರಿ, ಬಾಳೆಹೊನ್ನೂರು, ಕಳಸ, ಆಲೂರು, ಆನೇಕಲ್‌ನಲ್ಲಿ ತಲಾ 1 ಸೆಂ.ಮೀ ಮಳೆ ಬಿದ್ದಿದೆ.

ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಗುಡುಗುಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.