ADVERTISEMENT

ವೇತನ ಹೆಚ್ಚಿಸಿದರೆ ಮಾತ್ರ ಮುಷ್ಕರ ಕೈಬಿಡುತ್ತೇವೆ: ಅನಂತ ಸುಬ್ಬರಾವ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 7:02 IST
Last Updated 27 ಜುಲೈ 2016, 7:02 IST
ವೇತನ ಹೆಚ್ಚಿಸಿದರೆ ಮಾತ್ರ ಮುಷ್ಕರ ಕೈಬಿಡುತ್ತೇವೆ: ಅನಂತ ಸುಬ್ಬರಾವ್
ವೇತನ ಹೆಚ್ಚಿಸಿದರೆ ಮಾತ್ರ ಮುಷ್ಕರ ಕೈಬಿಡುತ್ತೇವೆ: ಅನಂತ ಸುಬ್ಬರಾವ್   

ಬೆಂಗಳೂರು: ರಸ್ತೆ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ವೇತನ ಹೆಚ್ಚಿಸಿದರೆ ಮಾತ್ರ ಮುಷ್ಕರ ಕೈ ಬಿಡುತ್ತೇವೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್ ವಿ ಅನಂತ ಸುಬ್ಬರಾವ್ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ  ಮಹತ್ವದ ಸಭೆ ನಡೆಯಲಿದ್ದು ಮುಷ್ಕರ ನಿರತ ನೌಕರರ ಸಂಘಟನೆಯ ಮುಂದಾಳುಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅನಂತ ಸುಬ್ಬರಾವ್, ಯಾವುದೇ ಕಾರಣಕ್ಕೂ ಶೇ. 10 ವೇತನ ಹೆಚ್ಚಳಕ್ಕೆ ನಾವು ಒಪ್ಪುವುದಿಲ್ಲ. ನಾವು ಒತ್ತಾಯಿಸಿದಂತೆ ವೇತನದಲ್ಲಿ ಶೇ.30 ರಷ್ಟು ಹೆಚ್ಚಳ ಮಾಡಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.