ADVERTISEMENT

ಶಿರಾಡಿ: ದ.ಕ.ಜಿಲ್ಲಾಧಿಕಾರಿಯ ಕಾರು ಅಪಘಾತ– ಪಾರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:51 IST
Last Updated 23 ಜುಲೈ 2016, 19:51 IST
ಶಿರಾಡಿ: ದ.ಕ.ಜಿಲ್ಲಾಧಿಕಾರಿಯ  ಕಾರು ಅಪಘಾತ– ಪಾರು
ಶಿರಾಡಿ: ದ.ಕ.ಜಿಲ್ಲಾಧಿಕಾರಿಯ ಕಾರು ಅಪಘಾತ– ಪಾರು   

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಶನಿವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಸರ್ಕಾರಿ ಫಾರ್ಚುನರ್‌ ಕಾರಿಗೆ ಬೆಂಗಳೂರಿನಿಂದ ಬರುತ್ತಿದ್ದ ಸ್ಕಾರ್ಪಿಯೊ ಡಿಕ್ಕಿ ಹೊಡೆದುದರಿಂದ ಜಿಲ್ಲಾಧಿಕಾರಿ ಅವರ ಪತ್ನಿ ಮತ್ತು ಸ್ಕಾರ್ಪಿಯೊದಲ್ಲಿದ್ದ 5 ಮಂದಿ ಗಾಯಗೊಂಡರು.

ಜಿಲ್ಲಾಧಿಕಾರಿ ಅವರ ಪತ್ನಿ ಸೌದಾ ಅವರ ಕಾಲಿಗೆ ಗಾಯವಾಗಿದ್ದು, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪುತ್ರ ರಜಾಕ್ ಮತ್ತು ಕಾರು ಚಾಲಕ ಮಹಮ್ಮದ್ ರಫೀಕ್ ಸಣ್ಣಪುಟ್ಟ ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಕಾರ್ಪಿಯೊದಲ್ಲಿದ್ದ ಬೆಂಗಳೂರು ಸಿದ್ದಾಪುರ ನಿವಾಸಿಗಳಾದ ಮಹಾದೇವ್ ಎಂಬವರಿಗೆ ಗಂಭೀರ ಗಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.