ADVERTISEMENT

ಸತ್ಯರಾಜ್‌ ಕಮೆಂಟ್‌ಗೂ ಬಾಹುಬಲಿ–2 ಸಿನಿಮಾಗೂ ಸಂಬಂಧವಿಲ್ಲ: ರಾಜಮೌಳಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:41 IST
Last Updated 20 ಏಪ್ರಿಲ್ 2017, 8:41 IST
ಸತ್ಯರಾಜ್‌ ಕಮೆಂಟ್‌ಗೂ ಬಾಹುಬಲಿ–2 ಸಿನಿಮಾಗೂ ಸಂಬಂಧವಿಲ್ಲ: ರಾಜಮೌಳಿ ಸ್ಪಷ್ಟನೆ
ಸತ್ಯರಾಜ್‌ ಕಮೆಂಟ್‌ಗೂ ಬಾಹುಬಲಿ–2 ಸಿನಿಮಾಗೂ ಸಂಬಂಧವಿಲ್ಲ: ರಾಜಮೌಳಿ ಸ್ಪಷ್ಟನೆ   

ಬೆಂಗಳೂರು: ‘ತಮಿಳು ನಟ ಸತ್ಯರಾಜ್‌ ಅವರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ಹೇಳಿಕೆ, ಅವರ ಮೇಲಿನ ಕೋಪವನ್ನು ಬಾಹುಬಲಿ–2 ಸಿನಿಮಾದ ಮೇಲೆ ತೋರಿಸಬಾರದು’ ಎಂದು ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ವಿಡಿಯೊ ಹೇಳಿಕೆ ಮತ್ತು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸತ್ಯರಾಜ್‌ ಅವರ ಕನ್ನಡ ವಿರೋಧಿ ಹೇಳಿಕೆ ಬಗ್ಗೆ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಅವರು ಕ್ಷಮೆ ಕೋರುವವರೆಗೂ ರಾಜ್ಯದಲ್ಲಿ ಬಾಹುಬಲಿ –2 ಸಿನಿಮಾ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿವೆ.  ಸಿನಿಮಾ ಬಿಡುಗಡೆಯಾಗುವ ದಿನ ಏಪ್ರಿಲ್‌ 28ರಂದು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್‌ಗೂ ಕರೆಕೊಟ್ಟಿವೆ.

ADVERTISEMENT

ಈ ಹಿನ್ನೆಲೆಯಲ್ಲಿ ಬಾಹುಬಲಿ–2 ಸಿನಿಮಾದ ನಿರ್ದೇಶಕ ರಾಜಮೌಳಿ ಅವರು ಸಿನಿಮಾ ಬಿಡುಗಡೆಗೆ ತೊಂದರೆ ಮಾಡಬಾರದು ಎಂದು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ರಾಜಮೌಳಿ ಅವರ ಪತ್ರಿಕಾ ಪ್ರಕಟಣೆಯ ಪೂರ್ಣಪಾಠ ಇಲ್ಲಿದೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.