ಭಟ್ಕಳ: ಮುರ್ಡೇಶ್ವರದ ಸಣ್ಣಬಾವಿ ಸಮೀಪ ಸಮುದ್ರದ ದಡದಲ್ಲಿ ಆಟವಾಡುತ್ತ ಸೋಮವಾರ ಕಾಣೆಯಾಗಿದ್ದ ಇಬ್ಬರು ಮಕ್ಕಳ ಮೃತದೇಹ ಮಂಗಳವಾರ ಕಾಯ್ಕಿಣಿ ಸಮುದ್ರ ದಡದಲ್ಲಿ ಪತ್ತೆಯಾಗಿವೆ.
ಮುರ್ಡೇಶ್ವರದ ಸಣ್ಣಬಾವಿ ನಿವಾಸಿಗಳಾಗಿದ್ದ ಗಣೇಶ ನಾಯ್ಕ (೧೨) ಮತ್ತು ವಿನಾಯಕ ನಾಯ್ಕ (೧೪) ಮೃತ ಬಾಲಕರು.
ನೀರಿನ ಸೆಳೆತಕ್ಕೆ ಸೋಮವಾರ ಕೊಚ್ಚಿಹೋಗಿದ್ದ ಅವರಿಗಾಗಿ ನಡೆಸಿದ್ದ ಶೋಧ ಕಾರ್ಯ ವಿಫಲವಾಗಿತ್ತು.
ಲಾರಿ ಪಲ್ಟಿ: ಕ್ಲೀನರ್ ಸ್ಥಳದಲ್ಲೇ ಸಾವು
ಅಂಕೋಲಾ: ತಾಲ್ಲೂಕಿನ ಮೂಲೆಮನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಕಲ್ಲಘಟಗಿ ಮೂಲದ ಶರೀಫ್ ಎಂಬಾತ ಸಾವಿಗೀಡಾಗಿದ್ದಾರೆ.
ಲಾರಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಸಾಗುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ.
ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.