ADVERTISEMENT

ಸರ್ಕಾರದ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ: ಬಿಎಸ್‌ ಯಡಿಯೂರಪ್ಪ

ಶಿಗ್ಗಾವಿ ದಲಿತ ಕಾಲೋನಿಯಲ್ಲಿ ಉಪಹಾರ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:37 IST
Last Updated 24 ಮೇ 2017, 6:37 IST
ಸರ್ಕಾರದ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ: ಬಿಎಸ್‌ ಯಡಿಯೂರಪ್ಪ
ಸರ್ಕಾರದ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ: ಬಿಎಸ್‌ ಯಡಿಯೂರಪ್ಪ   

ಶಿಗ್ಗಾವಿ: ಬೆಂಗಳೂರಿನಲ್ಲಿ 4ರಿಂದ 5 ಲಕ್ಷ ಜನ ರೈತರನ್ನು ಸೇರಿಸಿ ಸರ್ಕಾರದ ಮೂಗು ಹಿಡಿದು ಸಾಲ ಮನ್ನಾ ಮಾಡಿಸುತ್ತೇನೆ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ದಲಿತ ಕಾಲೋನಿ  ಮನೆಗಳಿಗೆ ಭೇಟಿ ನೀಡಿ ಮಾತನಾಡಿದರು.

‘ಈ ಸರ್ಕಾರ ಹಲವು ಹಗರಣ ಮಾಡಿದೆ. ಹಿರಿಯ, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದೆ. ಎಲ್ಲವನ್ನೂ ಶೀಘ್ರ ಬಹಿರಂಗ ಮಾಡುತ್ತೇನೆ ಎಂದರು.

ADVERTISEMENT

ಶಿಗ್ಗಾವಿ ದಲಿತ ಕಾಲೋನಿಯ ಹನುಮಂತಪ್ಪ ಅವರ ಮನೆಯಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಹಾರ ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.