ADVERTISEMENT

‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ’

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 10:27 IST
Last Updated 12 ಫೆಬ್ರುವರಿ 2016, 10:27 IST
‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ’
‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ’   

ಬೆಟದೂರ: ‘ಪರದೇಸಿಯಾಗಿ ಬೆಳ್ದ, ಮಗಳನ್ನ ಪರದೇಶಿ ಮಾಡಿ ಹ್ವಾದ...’

ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಅತ್ತೆ ಚನ್ನಬಸವ್ವ ದೇಗೇರಿ ಅವರ ಕಣ್ಣೀರಿನ ಮಾತುಗಳಿವು.

ಬೆಟದೂರಿನಲ್ಲಿ ಒಂದುಕಡೆ ಕೊಪ್ಪದ ಅವರ ಅಂತ್ಯಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಂಬಂಧಿಕರ ಕಣ್ಣೀರ ಕಟ್ಟೆ ಒಡೆದಿತ್ತು.

ADVERTISEMENT

ಮಗಳು ಮಹಾದೇವಿಯನ್ನು ಸಂತೈಸುತ್ತಿದ್ದ ಚನ್ನಬಸವ್ವ ದೇಗೇರಿ ಅವರ ದುಃಖದ ಮಾತುಗಳು ಅಲ್ಲಿದ್ದವರ ಮನಕಲಕುವಂತಿದ್ದವು.

‘ವಂದೇ ಮಾತರಂ’, ‘ಹನುಮಂತಪ್ಪ ಮತ್ತೊಮ್ಮೆ ಹುಟ್ಟಿಬಾ’ ಎಂಬ ಘೋಷಣೆಗಳೇ ಇಡೀ ಗ್ರಾಮವನ್ನು ತುಂಬಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.