ಅರಸೀಕೆರೆ: ತಾಲ್ಲೂಕಿನ ಶಶಿವಾಳ ಸಮೀಪ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ಮಗುಚಿ ಬಿದ್ದು, ನಾಲ್ವರು ಸ್ವಾಮೀಜಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲ್ಲೂಕಿನ ಡಿ.ಎಂ.ಕುರ್ಕೆ ಬೂದಿಹಾಲ್ ವಿರಕ್ತ ಮಠದಲ್ಲಿ ನಡೆಯುವ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ತಿಪಟೂರು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಸಿರಸಂಗಿ ಮುರುಘಾ ಶಾಖಾ ಮಠದ ಬಸವ ಮಹಂತ ಸ್ವಾಮೀಜಿ, ಚಳ್ಳಕೆರೆಯ ಶಾಖಾ ಮಠದ ಬಸವ ಕಿರಣ ಸ್ವಾಮೀಜಿ, ಶಿರಸಿ ರುದ್ರದೇವಮಠದ ಮಲ್ಲಿಕಾರ್ಜುನ ಸ್ವಾಮೀ ತೆರಳುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.