ADVERTISEMENT

ಷ.ಶೆಟ್ಟರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪನಾಗೆ ಪ್ರಶಸ್ತಿ ಗರಿ

ರನ್ನ ಹಳಗನ್ನಡ ಪ್ರಶಸ್ತಿ; ನಾಳೆ ಮುಖ್ಯಮಂತ್ರಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಷ.ಶೆಟ್ಟರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪನಾಗೆ ಪ್ರಶಸ್ತಿ ಗರಿ
ಷ.ಶೆಟ್ಟರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಹಂಪನಾಗೆ ಪ್ರಶಸ್ತಿ ಗರಿ   

ಬಾಗಲಕೋಟೆ: ಮುಧೋಳದ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನದಿಂದ ನೀಡುವ ‘ರನ್ನ ಹಳಗನ್ನಡ ಪ್ರಶಸ್ತಿ’ಗೆ ಸಂಶೋಧಕರಾದ ಡಾ.ಷ. ಶೆಟ್ಟರ್, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಹಾಗೂ ಡಾ.ಹಂಪ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯನ್ನು ಇತಿಹಾಸ, ಕನ್ನಡ ಹಾಗೂ ಜೈನ ಸಾಹಿತ್ಯದ ಸಂಶೋಧನೆ ಪ್ರಕಾರದಲ್ಲಿ ನೀಡಲಾಗಿದೆ. ಪ್ರಶಸ್ತಿ ಮೊತ್ತ ತಲಾ ₹1 ಲಕ್ಷ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಫೆಬ್ರುವರಿ 25ರಂದು ಮುಧೋಳದ ರನ್ನ ಕ್ರೀಡಾಂಗಣದಲ್ಲಿ ನಡೆಯುವ ರನ್ನ ವೈಭವದ ಐದನೇ ಸಾಂಸ್ಕೃತಿಕ ಉತ್ಸವದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಇದೇ ವೇಳೆ ಕವಿ ರನ್ನನ ಕುರಿತು ಪ್ರತಿಷ್ಠಾನ ಹೊರತಂದಿರುವ ಐದು ಕೃತಿಗಳ ಲೋಕಾರ್ಪಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.