ADVERTISEMENT

ಖೈದಿಗಳ ಬಸ್‌ ಮೇಲೆ ಗುಂಡಿನ ದಾಳಿ: ಏಳು ಸಾವು

ಪಿಟಿಐ
Published 27 ಫೆಬ್ರುವರಿ 2017, 10:36 IST
Last Updated 27 ಫೆಬ್ರುವರಿ 2017, 10:36 IST
ಖೈದಿಗಳ ಬಸ್‌ ಮೇಲೆ ಗುಂಡಿನ ದಾಳಿ: ಏಳು ಸಾವು
ಖೈದಿಗಳ ಬಸ್‌ ಮೇಲೆ ಗುಂಡಿನ ದಾಳಿ: ಏಳು ಸಾವು   

ಕೊಲಂಬೊ: ಪೊಲೀಸ್‌ ಬಸ್‌ನಲ್ಲಿ ಖೈದಿಗಳನ್ನು ಕೋರ್ಟ್‌ಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಭೂಗತ ಪಾತಕಿ ಸೇರಿದಂತೆ ಏಳು ಜನ ಮೃತಪಟ್ಟಿದ್ದಾರೆ.


ಶ್ರೀಲಂಕಾದ ವಾಯವ್ಯ ಭಾಗದಲ್ಲಿರುವ ಕಲುತರ ಜೈಲಿನಿಂದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖೈದಿಗಳನ್ನು ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಆಗಂತುಕರು ಬಸ್‌ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಕಲುತರ ಜಂಕ್ಷನ್ನಿನ ನಗಹ ವೃತ್ತದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಕುಖ್ಯಾತ ಭೂಗತ ಪಾತಕಿ ಅರುಣಾ ಉದಯಂಗಾ ಅಲಿಯಾಸ್‌ ಸಮಯನ್‌ ಹಾಗೂ ಆತನ ಇಬ್ಬರು ಸಹಚರರ ಸಹಿತ ಒಟ್ಟು ಏಳು ಜನ ಮೃತಪಟ್ಟಿದ್ದಾರೆ.

ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು, ನಾಲ್ವರು ಖೈದಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT