ADVERTISEMENT

ಶ್ರೀಲಂಕಾ: ಸಾವಿನ ಸಂಖ್ಯೆ 151ಕ್ಕೆ ಏರಿಕೆ

ಪಿಟಿಐ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಭೂಕುಸಿತಕ್ಕೆ ಒಳಗಾಗಿರುವ ಅಥ್ವೆಲ್ತೋಟಾ ಗ್ರಾಮದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಶೋಧ ನಡೆಸಿದರು    –ಎಎಫ್‌ಪಿ ಚಿತ್ರ
ಭೂಕುಸಿತಕ್ಕೆ ಒಳಗಾಗಿರುವ ಅಥ್ವೆಲ್ತೋಟಾ ಗ್ರಾಮದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಶೋಧ ನಡೆಸಿದರು –ಎಎಫ್‌ಪಿ ಚಿತ್ರ   

ಕೊಲಂಬೊ: ಧಾರಾಕಾರ ಮಳೆಯಿಂದ ಶ್ರೀಲಂಕಾದಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂ ಕುಸಿತದಿಂದ ಮೃತರಾದವರ ಸಂಖ್ಯೆ ಭಾನುವಾರ 151ಕ್ಕೆ ಏರಿಕೆಯಾಗಿದೆ.

ಪ್ರವಾಹದ ಹರಿವು ಕಡಿಮೆಯಾದ ನಂತರ ಭದ್ರತಾ ಪಡೆ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

15 ಜಿಲ್ಲೆಗಳಲ್ಲಿನ ಸುಮಾರು 4.42 ಲಕ್ಷ ಜನ ಪ್ರವಾಹದಿಂದ ತೊಂದರೆಗೆ ಈಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. 112 ಮಂದಿ ಕಾಣೆಯಾಗಿದ್ದು, 25 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ADVERTISEMENT

ಮಳೆ ತಾತ್ಕಾಲಿಕವಾಗಿ ನಿಂತಿದೆ, ಆದರೆ ಮೇ 29ರಿಂದ ನೈರುತ್ಯ ಭಾಗದಲ್ಲಿ ಅಧಿಕ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಮುದ್ರದ ಕಡೆ ತೆರಳದಂತೆ  ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ವಿಶ್ವಸಂಸ್ಥೆ ಹಾಗೂ ನೆರೆಹೊರೆಯ ರಾಷ್ಟ್ರಗಳ ನೆರವಿಗೆ ವಿದೇಶಾಂಗ ಸಚಿವರು  ಕೋರಿದ್ದಾರೆ. ಭಾರತ ಈಗಾಗಲೇ ನೆರವಿನ ಸಾಮಗ್ರಿಗಳನ್ನು ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.