ಇಸ್ಲಾಮಾಬಾದ್: ಗಡಿ ದಾಟಿ ಪಾಕಿಸ್ತಾನದ ವಿರುದ್ಧ ಹೋರಾಡಬೇಕಾದ ಸಂದರ್ಭ ಬಂದರೆ ಅವರ ಅಣ್ವಸ್ತ್ರ ಸವಾಲನ್ನೂ ಎದುರಿಸಲು ಸಿದ್ಧ ಎಂಬ ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆಗೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
‘ಬಿಪಿನ್ ರಾವತ್ ಹೇಳಿಕೆ ಪರಮಾಣು ಸಮರಕ್ಕೆ ನೀಡಿದ ಕರೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಹೇಳಿದ್ದಾರೆ.
ಬಿಪಿನ್ ಹೇಳಿಕೆಗೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಖ್ವಾಜಾ, ‘ಭಾರತೀಯ ಸೇನಾ ಮುಖ್ಯಸ್ಥರ ಬೇಜವಾಬ್ದಾರಿಯುತ ಮತ್ತು ಅವರ ಘನತೆಗೆ ತಕ್ಕುದಲ್ಲದ ಹೇಳಿಕೆ ಇದಾಗಿದೆ. ಇದರಿಂದ ಪರಮಾಣು ಸಮರಕ್ಕೆ ಕರೆ ನೀಡಿದಂತೆ. ಇದನ್ನೇ ಅವರು ಬಯಸುತ್ತಾರೆ ಎಂದಾದಲ್ಲಿ ನಮ್ಮನ್ನು ಪರೀಕ್ಷಿಸಲು ಅವರಿಗೆ ಸ್ವಾಗತವಿದೆ. ಅವರ ಅನುಮಾನವನ್ನು ಪರಿಹರಿಸಲಾಗುವುದು, ಇನ್ಶಾಲ್ಲಾಹ್’ ಎಂದು ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.