ಮನೆಯಲ್ಲಿ ಅಲಂಕಾರಕ್ಕೆ ಇರಿಸುವ ಮನಿಪ್ಲಾಂಟ್ಗೆ ವಾಸ್ತುವಿನ ಮಹತ್ವವೂ ಇದೆ. ಮನೆಯಲ್ಲಿ ಮನಿಪ್ಲಾಂಟ್ ಇರಿಸುವುದರಿಂದ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಹಲವರದು. ಮಣ್ಣು, ನೀರು ಎರಡರಲ್ಲೂ ಬೆಳೆಯುವ ಮನಿಪ್ಲಾಂಟ್ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
* ಮನಿಪ್ಲಾಂಟ್ ಬೆಳೆಸುವುದರಿಂದ ಮನೆಯ ಸಂಪತ್ತಿನ ಜೊತೆಗೆ ಆದಾಯವೂ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
*ಇದನ್ನು ಮನೆಯ ನೈಋತ್ಯ ಭಾಗದಲ್ಲಿರಿಸಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
*ಈಶಾನ್ಯ ಭಾಗದಲ್ಲಿ ಇದನ್ನು ಇರಿಸುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಮನೆಮಾಡುತ್ತದೆ. ಇದರಿಂದ ಮನೆಮಂದಿಯ ನಡುವೆ ಇರುಸುಮುರುಸು ಉಂಟಾಗುವ ಸಂಭವವಿರುತ್ತದೆ.
*ಇದನ್ನು ಕಂಪ್ಯೂಟರ್, ಟಿ.ವಿ. ಪಕ್ಕದಲ್ಲಿ ಇರಿಸುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ.
*ಇದನ್ನು ಮನೆಯಲ್ಲಿ ಇರಿಸುವುದರಿಂದ ನೆಮ್ಮದಿ ನೆಲೆಸುತ್ತದೆ. ನಿದ್ರೆ ಸಮಸ್ಯೆ ಮತ್ತು ಇನ್ನೊಬ್ಬರ ಜೊತೆ ವಾದ ಮಾಡುವ ಸನ್ನಿವೇಶವೂ ಎದುರಾಗುವುದಿಲ್ಲ.
*ಇದನ್ನು ಮನೆಯ ಉದ್ಯಾನದಲ್ಲಿ ನೆಡುವುದಕ್ಕಿಂತ ಮನೆಯ ಒಳಗೆ ನೆಟ್ಟರೆ ಅದೃಷ್ಟ ಒಲಿಯುತ್ತದೆ.
(ಮೂಲ: ವಾಸ್ತು ಶಾಸ್ತ್ರ ಗುರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.