ADVERTISEMENT

‘ಅಬ್ದುಲ್ಲಾ’ಗಳ ಅಪಲಾಪ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST

ಭಾರತದಲ್ಲಿ ನೆಹರೂ ವಂಶಾಡಳಿತವನ್ನು, ಕಾಶ್ಮೀರದಲ್ಲಿ ಅಬ್ದುಲ್ಲಾಗಳ ವಂಶಾಡಳಿತವನ್ನು ದಶಕಗಳ ಕಾಲ ಸಹಿಸಿದ್ದೇವೆ. ‘ಕಾಶ್ಮೀರ ಸಿಂಹ’ ಎಂದು ಕರೆಸಿಕೊಳ್ಳುತ್ತಿದ್ದ, ‘ಪ್ರಧಾನಿ’ ಎಂಬ ಬಿರುದಾಂಕಿತ ಶೇಖ್‌ ಅಬ್ದುಲ್ಲಾ ‘ಸ್ವತಂತ್ರ’ ಕಾಶ್ಮೀರದ ಗರ್ಜನೆ ಮಾಡಿದ್ದರಿಂದ ಅವರ ಖಾಸಾ ಮಿತ್ರ ನೆಹರೂ ಅವರೇ ಅವರನ್ನು ಜೈಲಿಗೆ ತಳ್ಳಿದ್ದರು.

ಈಗ ಅವರ ಮಗ ಫಾರೂಕ್ ಅಬ್ದುಲ್ಲಾ, ಮೊಮ್ಮಗ ಒಮರ್ ಅಬ್ದುಲ್ಲಾ ಭಯೋತ್ಪಾದಕರನ್ನು ‘ಕ್ರಾಂತಿಕಾರಿ’ಗಳೆಂದು ಬಿಂಬಿಸುತ್ತಾ ‘ಸ್ವತಂತ್ರ’ ಕಾಶ್ಮೀರದರಾಗ ತೆಗೆದಿದ್ದಾರೆ. ಅಧಿಕಾರ ಇಲ್ಲದಾಗ ಇವರು ಅಪಸ್ವರ ಹೊರಡಿಸುತ್ತಾರೆ.
–ಪ್ರೊ. ಆರ್.ವಿ. ಹೊರಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.