‘ಕಪ್ಪು ಬಣ್ಣ ಕಂಡರೆ ನಮಗೆ ಆಗುವುದಿಲ್ಲ’ ಎಂಬ ಲೇಖನದಲ್ಲಿ ಪದ್ಮರಾಜ ದಂಡಾವತಿಯವರು (ಪ್ರ.ವಾ., ನಾಲ್ಕನೇ ಆಯಾಮ, ಫೆ. 7) ವರ್ಣ ದ್ವೇಷದ ಬಗ್ಗೆ ಬರೆದಿದ್ದಾರೆ. ಇದು ಅರ್ಧ ಸತ್ಯವಾಗಿದ್ದು ಇನ್ನರ್ಧ ಸತ್ಯವನ್ನು ಅವರು ಗೌಣವಾಗಿಸಿದ್ದಾರೆ.
ಪ್ರಜ್ಞಾವಂತರಾದ ಬೆಂಗಳೂರಿಗರು ಸುಖಾಸುಮ್ಮನೆ ಯಾರನ್ನೂ ದ್ವೇಷಿಸುವ ಗೋಜಿಗೆ ಹೋಗುವುದಿಲ್ಲ.
ಹಾಗಿದ್ದರೆ ಚಿತ್ರನಟರಾದ ದುನಿಯಾ ವಿಜಿ, ಜಗ್ಗೇಶ್, ಸಾಧು ಕೋಕಿಲ, ಕರಿಬಸವಯ್ಯ, ಬಿರಾದಾರ ಮುಂತಾದವರನ್ನು ನಮ್ಮವರು ಹೆಚ್ಚು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿರಲಿಲ್ಲ. ಶ್ರೀಕೃಷ್ಣ ಪರಮಾತ್ಮನನ್ನು ಪೂಜಿಸುತ್ತಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.