ADVERTISEMENT

ಅವರಿಗಷ್ಟೇ ಸಾಲದು

ವಿಜಯಕುಮಾರ ಎಮ್, ಬಾದಾಮಿ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಐದೂವರೆ ದಶಕಗಳ ಹಿಂದೆ ನಿರಾಶ್ರಿತರಾಗಿ ಭಾರತಕ್ಕೆ ಬಂದ ಟಿಬೆಟನ್ನರಿಗೆ ಪುನರ್ವಸತಿ ಅಂಗವಾಗಿ ನೀಡಿದ್ದ ಅರಣ್ಯ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿ, ಪಹಣಿ ನೀಡಲು ಸರ್ಕಾರ ತೀರ್ಮಾನಿಸಿದೆ (ಪ್ರ.ವಾ. ನ. 27). ನಮ್ಮ ದೇಶದ ಅನೇಕ ಜನರು ಉಳಲು ಭೂಮಿಯಿಲ್ಲದೆ ಹೆಣಗಾಡುತ್ತಿದ್ದಾರೆ.

ಟಿಬೆಟನ್ನರು ಸಾಕಷ್ಟು ದಶಕಗಳಿಂದ ನಮ್ಮ ದೇಶದಲ್ಲಿ ನೆಲೆಸಿದ್ದಾರೆ. ಆದರೆ, ತಲೆತಲಾಂತರದಿಂದ ಇಲ್ಲಿಯೇ ಹುಟ್ಟಿ, ಇದೇ ಮಣ್ಣಲ್ಲಿಯೇ ಬೆಳೆದು, ಭೂಮಿಗಾಗಿಯೆ ಜೀವನದುದ್ದಕ್ಕೂ ಹೋರಾಟ ಮಾಡುತ್ತಿರುವ ಆದಿವಾಸಿಗಳು ಹಾಗೂ ಬಿಳಿಗಿರಿ ರಂಗನಬೆಟ್ಟದ ಸೋಲಿಗರಿಗೂ  ಭೂಮಿಯ ಹಕ್ಕನ್ನು ನೀಡುವುದು ಅಗತ್ಯ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.