ADVERTISEMENT

ಆರೋಗ್ಯ ಪರೀಕ್ಷಿಸಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ಸರ್ಕಾರ, ಸಾರಿಗೆ ನೌಕರರ ಆರೋಗ್ಯ ಸ್ಥಿತಿಗತಿ ಕುರಿತು ತಿಂಗಳಿಗೊಮ್ಮೆ ತಪಾಸಣೆ ನಡೆಸಬೇಕು. ನಿರ್ವಾಹಕ ಮತ್ತು ಚಾಲಕರು ದೈಹಿಕ, ಮಾನಸಿಕವಾಗಿ ಸಮರ್ಥರೆಂದು ಕಂಡುಬಂದರೆ ಮಾತ್ರ ಅವರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ಚಾಲಕ ಮತ್ತು ನಿರ್ವಾಹಕರು  ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದರ ನೇರ ದುಷ್ಪರಿಣಾಮವನ್ನು ಅಮಾಯಕ ಪ್ರಯಾಣಿಕರು ಅನುಭವಿಸಬೇಕಾಗುತ್ತದೆ.

ನಿರ್ವಾಹಕರೊಬ್ಬರು ಭಾನುವಾರ ನದಿಗೆ ಜಿಗಿದದ್ದು  ನೋವಿನ ಸಂಗತಿ. ಮುಂದೊಂದು ದಿನ ಚಲಿಸುವ ಬಸ್ಸಿನಿಂದ ಚಾಲಕರೇ ಇಂತಹ ಅನಾಹುತಗಳನ್ನು ಮಾಡಿಕೊಳ್ಳಬಹುದು. ಮೇಲಧಿಕಾರಿಗಳು ಮುಂಜಾಗ್ರತಾ ಕ್ರಮಗಳ ಮೂಲಕ ಇಂತಹ ಅನಾಹುತಗಳನ್ನು ತಪ್ಪಿಸಬೇಕು.
–ಗೋಪಾಲ ಬ. ಪಾಂಡೇಗಾಂವಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.