ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸೌಧದ ಮುಂದೆ ಆಡಂಬರದ ಸಮಾರಂಭ ಆಯೋಜಿಸಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಲು ಇಷ್ಟೊಂದು ಅದ್ದೂರಿತನದ ಅಗತ್ಯವಿತ್ತೇ? ಕೆಲವೇ ಕೆಲವು ಜನರ ಮಧ್ಯೆ, ಸರಳವಾಗಿ ಇಂಥ ಕಾರ್ಯಕ್ರಮ ನಡೆದರೆ ಜನ ಅವರನ್ನು ಮುಖ್ಯಮಂತ್ರಿ ಎನ್ನುವುದಿಲ್ಲವೇ? ಈ ಸಮಾರಂಭಕ್ಕಾಗಿ ಅದೆಷ್ಟು ಹಣ ಖರ್ಚಾಯಿತೋ! ‘ಯಾರದೋ ಹಣ; ಎಲ್ಲಮ್ಮನ ಜಾತ್ರೆ’!
ಇಂಥ ದುಂದುವೆಚ್ಚಗಳನ್ನು ನಿಲ್ಲಿಸಿ, ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು. ಇನ್ನು ಮುಂದಾ
ದರೂ ಜನಪ್ರತಿನಿಧಿಗಳು ಅಂಥ ಭಾವನೆ ಬೆಳೆಸಿಕೊಳ್ಳಲಿ.
-ಸುಭಾಸ ಯಾದವಾಡ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.