ಮೈಸೂರು ವಿಶ್ವವಿದ್ಯಾಲಯದಲ್ಲಿ ಈಗ ಕುಲಪತಿಗಳು ನೇಮಕಗೊಳ್ಳದೆ ಇರುವುದರಿಂದ ಶೈಕ್ಷಣಿಕವಾದ ಹಲವಾರು ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈಗಿರುವ ಪ್ರಭಾರ ಕುಲಪತಿಗಳು ಅತಿಥಿ ಉಪನ್ಯಾಸಕರ ನೇಮಕದಲ್ಲಿ ಪ್ರತಿಭೆ, ರೋಸ್ಟರ್, ಹಿರಿತನ... ಎಲ್ಲವನ್ನೂ ಉಲ್ಲಂಘಿಸುವ ಜೊತೆಗೆ ಕೇಳಲು ಹೋಗುವ ಪ್ರತಿಭಾವಂತರನ್ನು ಅಪಮಾನಗೊಳಿಸುತ್ತಿದ್ದಾರೆ. ಹಿರಿಯ ಅತಿಥಿ ಉಪನ್ಯಾಸಕರ ಗೋಳನ್ನು ಕೇಳುವವರು ಇಲ್ಲವಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳು ನೇಮಕಗೊಳ್ಳದೆ ಇರುವುದು ಶೋಚನೀಯ. ರಾಜ್ಯಪಾಲರು ಕೂಡ ಈ ಬಗ್ಗೆ ಗಮನ ಹರಿಸದಿರುವುದು ದುರಂತ. ಶತಮಾನೋತ್ಸವ ಆಚರಿಸಿದ ವಿಶ್ವವಿದ್ಯಾಲಯಕ್ಕೆ ಈ ಗತಿಯೇ?
–ಡಾ. ನೀಲಕಂಠಯ್ಯ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.