ಅಪ್ಪ ಸತ್ತಾಗ ಅಳಲಿಲ್ಲ
ಅವ್ವ ಸತ್ತಾಗ ಅಳಲಿಲ್ಲ
ರೈತ ನೇಣು ಏರಿದಾಗ ಅಳಲಿಲ್ಲ
ಕೊಳವೆಯಲ್ಲಿ ಮಗು ಬಿದ್ದಾಗ ಅಳಲಿಲ್ಲ
ನೆರೆ– ಬರ ಬಂದು
ಜನ– ದನ ಸತ್ತಾಗ ಅಳಲಿಲ್ಲ
ಟಿಕೆಟ್ ಕೈತಪ್ಪಿತೆಂದು
ಗಳಗಳನೆ ಅಳುವರು ನೋಡಾ
ಗಳಗಳನಾಥೇಶ್ವರಾ!
ಚಂದ್ರಕಾಂತ ಪಡೇಸೂರ, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.