ADVERTISEMENT

ಗುಲ್ಬರ್ಗ ರಂಗಾಯಣ: ನಿರ್ದೇಶಕರು ಬೇಕು

ಮುದಗಲ್ ವೆಂಕಟೇಶ
Published 20 ಅಕ್ಟೋಬರ್ 2014, 19:30 IST
Last Updated 20 ಅಕ್ಟೋಬರ್ 2014, 19:30 IST

ರಂಗ ಚಟುವಟಿಕೆಗಳು ರಾಜ್ಯದಾದ್ಯಂತ ಪಸರಿಸಬೇಕು ಎಂಬ ಕಾರಣದಿಂದ ಧಾರವಾಡ, ಶಿವಮೊಗ್ಗ ಮತ್ತು ಗುಲ್ಬರ್ಗಕ್ಕೆ ರಂಗಾಯಣದ ಒಂದೊಂದು ಘಟಕವನ್ನು ಸರ್ಕಾರ ಮಂಜೂರು ಮಾಡಿದೆ. ಧಾರವಾಡ, ಶಿವಮೊಗ್ಗ ಘಟಕಕ್ಕೆ ನಿರ್ದೇಶಕರ ನೇಮಕಾತಿಯೂ ಆಗಿ ರಂಗ ಚಟುವಟಿಕೆ­ಗಳು ಆರಂಭಗೊಂಡಿವೆ. ಆದರೆ, ಗುಲ್ಬರ್ಗ ರಂಗಾ­ಯಣದ ವಿಚಾರ ಇನ್ನೂ ಕಡತದಲ್ಲೇ ಉಳಿದಿದೆ. 

ಮೀಸಲಿರಿಸಿದ ರೂ 1ಕೋಟಿ ಅನುದಾನ ಖರ್ಚಾಗಿಲ್ಲ.  ಇಲ್ಲಿನ ಘಟಕಕ್ಕೆ ನಿರ್ದೇಶಕರ ನೇಮಕಾತಿಗೆ ಸ್ವತಃ ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಇನ್ನೂ ಮನಸ್ಸು ಮಾಡಿಲ್ಲ.  ರಂಗಾಯಣದ ನಿರ್ದೇಶಕರ ನೇಮಕಾತಿಗೆ ಸಚಿವೆ ಹಸಿರು ನಿಶಾನೆ ತೋರಿಸದಿರಲು ಕಾರಣ ಏನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.