‘ಆ ಎರಡು ಪಾರ್ಟಿಯಿಂದ ಹಣ ಈಸಿಕೊಂಡರೂ, ವೋಟು ಮಾತ್ರ ಮೂರನೆಯದಕ್ಕೆ ಹಾಕಿ’ ಎಂದು ಅರವಿಂದ ಕೇಜ್ರಿವಾಲ್ ಹೇಳಿರುವುದಕ್ಕೆ ಚುನಾವಣಾ ಆಯೋಗ ಅವರಿಗೆ ಎಚ್ಚರಿಕೆ ನೀಡಿದೆ. ಇದು, ‘ಲಂಚ ತೊಗೊಳ್ಳಿ’ ಎಂಬ ಪುಸಲಾವಣೆಯಂತೆ!
ಓದು,ಬರಹವುಳ್ಳವರಿಗಾದರೆ, ಇದು ಪ್ರಾಕ್ಟಿಕಲ್ ಜೋಕ್ ಎಂದು ಅರ್ಥವಾಗುತ್ತದೆ. ಆದರೆ ದೂರು ಕೊಟ್ಟವರೂ, ತೀರ್ಮಾನಿಸಿದವರೂ ಈ ಕೆಟಗರಿಗೆ ಬರುವುದಿಲ್ಲವೇನೋ?! ‘ಯಾರು ಹಣ ಕೊಡುತ್ತಾರೋ ಅವರಿಗೇ ವೋಟ್ ಹಾಕಿ; ಅದೇ ನ್ಯಾಯ’ ಎಂದರೆ ಅದು ಬಹುಶಃ ಉಲ್ಲಂಘನೆಯಾಗಲಿಕ್ಕಿಲ್ಲ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.