‘ಬೇಂದ್ರೆ ಸಣ್ಣ ಮನುಷ್ಯ’ ಅಂತ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದ್ದಾರೆ (ಪ್ರ.ವಾ., ಡಿ.21).
ಬೇಂದ್ರೆಯವರು ‘ಸಣ್ಣ ಮನುಷ್ಯ’ ಇರಬಹುದು, ನನಗೆ ಗೊತ್ತಿಲ್ಲ. ಆದರೆ ಅವರು ಪ್ರಾಧಿ-ಕಾರದ ಪ್ರವಾಸ ಭತ್ಯೆ, ಸಾಹಿತ್ಯ ಪರಿಷತ್ತಿನ ಖರ್ಚಿನ ಗೋಜಲು ಲೆಕ್ಕ, ಸಾರ್ವಜನಿಕ ಹಣದ ದುರುಪಯೋಗದ ಆಪಾದನೆ ಇತ್ಯಾದಿಗೆ ಒಳಗಾಗಿ ಲಂಕೇಶರು ಸೇರಿದಂತೆ ಇತರ ಸಾಹಿತ್ಯ ಮಿತ್ರರ ನೈತಿಕ ವಿಮರ್ಶೆಗೆ, ವಿಚಾರಣೆಗೆ ಗುರಿಯಾದದ್ದನ್ನು ನಾನು ಕಾಣೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.