ನಿದ್ದೆ, ನಿನ್ನ ಸದ್ದಿಗೆ
ಗದ್ದುಗೆಯೂ ಗುದ್ದಿಗೆ..!?
ರಾಜ್ಯ-–ರಾಜರು,
ಶಾಸಕಾಂಗ-–ಕಾರ್ಯಾಂಗಗಳೆಲ್ಲ
ಶಯನ ಮಂದಿರಗಳಾಗಿವೆ:
ಹೋಗು ಎಲ್ಲಿಗಾದರೂ ಹಾಳುಬಿದ್ದು,
ಕಡುಪಾಪಿ ನಿದ್ದೆ..!
ಸಿಟ್ಟಿಗೆದ್ದ ನಿದ್ದೆ,
ತಲೆ-–ಮೈ ಕೊಡವಿಕೊಂಡು,
ಕಣ್ಣು ಕೆಂಪ ಮಾಡಿಕೊಂಡು,
ಎದ್ದುಬಿದ್ದು ಜಾಡಿಸಿತು:
ಗೌಡರ ಮೆದುಳಲ್ಲಿದ್ದೆ,
‘ರೆಡಿ’ರಾಮಯ್ಯನವರ ಮೈಯಲ್ಲಿದ್ದೆ,
ಇನ್ನು ಎಲ್ಲೆಲ್ಲೋ ಯಾರ್್ಯಾರದೋ
ಮೈಮನದಾಳದಿ ಕೆಲಸ ಮಾಡುತ್ತಿದ್ದೆ.
ಬುದ್ಧಿ ಮೂಲ ನಾನಲ್ಲವೇ,
ಹಾಗಾಗಿ ಅದು ಇರಬೇಕಾದವರ ಬಳಿಯಿದ್ದೆ,
ನಿನ್ನದೇನು ಕಡ್ಡಿ..!?
ಸುಮ್ಮನಾದೆ, ನಿೋರೊ ನೆನಪಾದ..!
ನಿದ್ದೆಗಣ್ಣಲ್ಲೇ ಒದರಿದೆ:
‘ಏಳಿರೋ, ಎಚ್ಚೆತ್ತುಕೊಳ್ಳಿರೋ,
ಉಳಿಸಿಕೊಳ್ಳಿರೋ, ಕಾಪಾಡಿರೋ,
ಮಾನ ಮಣ್ಣಾಗುವುದರೊಳಗೆ
ಕಣ್ಣುಜ್ಜಿಕೊಳ್ಳಿರೋ...!?’
-–ವಿಜಯಕಾಂತ ಪಾಟೀಲ, ಹಾನಗಲ್ಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.