ಋತುಸ್ರಾವದ ಅವಧಿಯಲ್ಲಿ ಬಳಸುವ ನ್ಯಾಪ್ಕಿನ್ಗಳಿಗೆ ತೆರಿಗೆ ವಿಧಿಸಿದಾಗ ಬಳಕೆದಾರರ ಅಳಲು ಮತ್ತು ಅದರ ಅವಶ್ಯಕತೆಯ ಬಗ್ಗೆ ಅರಿವಿಲ್ಲದವರಿಗೂ ವಿವರ ಮನದಟ್ಟಾಯಿತು. ಜನಬಳಕೆಯ ವಸ್ತುವೊಂದು ದುಬಾರಿಯಾಗಬಾರದು ಎನ್ನುವಾಗ ಬೇಕು– ಬೇಡಗಳ ಬಗ್ಗೆ ಗಮನ ಹರಿಸಬೇಕಾದುದು ಅವಶ್ಯಕ.
ಆ ನಿಟ್ಟಿನಲ್ಲಿ ವಿಚಾರ ಮಾಡುವುದಾದರೆ ಪಡಿತರದ ಮೂಲಕ ರಿಯಾಯಿತಿ ಅಥವಾ ಉಚಿತವಾಗಿ ನೀಡುವ ‘ಭಾಗ್ಯ’ ಒದಗಿಬಂದರೆ ಸಮಸ್ಯೆಗೆ ಪರಿಹಾರ ಆಗಬಹುದಲ್ಲವೇ? ಇನ್ನಿತರ ಭಾಗ್ಯಗಳಂತೆ ಈ ಭಾಗ್ಯವನ್ನು ಜಾರಿಗೆ ತಂದರೆ ನಾಡ ಜನರು ಅದನ್ನು ಮೆಚ್ಚಬಹುದು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಆಗಲು ಅವಕಾಶವಿದೆ. ಮನಸ್ಸು ಮಾಡಬೇಕು ಅಷ್ಟೇ.
-ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.