ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿಯವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಗೆ ಸಾಮಾನ್ಯವಾಗಿ ಹಿರಿಯರನ್ನು ಆಯ್ಕೆ ಮಾಡುತ್ತ ಸಾಹಿತ್ಯ ಪರಂಪರೆಯ ಪ್ರಜ್ಞೆ ಕಾಪಾಡಿಕೊಂಡು ಬಂದಿದೆ. ಹಿರಿಯರನ್ನು ಗೌರವಿಸುತ್ತ ಬಂದಿದೆ.
ಕಸಾಪ ತನ್ನ ಶತಮಾನೋತ್ಸವ ಸಂದರ್ಭದ ಸಾಹಿತ್ಯ ಸಮ್ಮೇಳನಕ್ಕೆ ಹೊಸದೇನನ್ನಾದರೂ ಮಾಡಬೇಕೆನ್ನಿಸಿದ್ದರೆ ಅದನ್ನು ಮೊದಲು ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಿ ತೀರ್ಮಾನಿಸಬೇಕು. ಈವರೆಗೆ ನವೋದಯ, ನವ್ಯ ಪರಂಪರೆಯ ಸಾಹಿತಿಗಳಿಗೆ ಕಸಾಪ ಮನ್ನಣೆ ನೀಡಿದೆ. ದಲಿತ–ಬಂಡಾಯ ಚಳವಳಿ ಪ್ರಮುಖರ ಕೊಡುಗೆಯನ್ನೂ ಗಮನಿಸಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.