ADVERTISEMENT

ಪಶ್ಚಿಮಘಟ್ಟ: ಋಣ ಮತ್ತು ನಂಬಿಕೆ

ಅನಿತಾ ರಮೇಶ್‌, ಶಿವಮೊಗ್ಗ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಪಶ್ಚಿಮಘಟ್ಟದ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯ ಗುರುತಿಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿದೆ (ಪ್ರ.ವಾ., ಸೆ. 26).
ಆದರೆ ಸುಮಾರು 10–15 ವರ್ಷಗಳ ಅವಿರತ ಪರಿಶ್ರಮದಿಂದ ರೂಪು­ಗೊಂಡ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಅವರ ವರದಿಯನ್ನು  ಪಕ್ಕಕ್ಕಿಟ್ಟು, ಡಾ.ಕಸ್ತೂರಿ­ರಂಗನ್‌ ನೇತೃತ್ವದಲ್ಲಿ ಮತ್ತೊಂದು ಸಮಿತಿ  ರಚಿಸಿದಾಗಲೇ ಪಶ್ಚಿಮ ಘಟ್ಟದ ಹಣೆಬರಹ ಬಹು­ತೇಕ ನಿಶ್ಚಯವಾಗಿತ್ತು.

ಈಗ ಸರ್ಕಾರದ  ಅಧಿಕಾರಿಗಳ ನೇತೃ­ತ್ವದ (ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ) ಸಮಿತಿಗಳು ಏನು ಮಾಡಿ­ಯಾವು?
ಸರ್ಕಾ­ರದ ಋಣದಲ್ಲಿರುವ ಈ ಅಧಿಕಾರಿ­ಗಳು ಪಶ್ಚಿಮಘಟ್ಟ ಉಳಿಸುವ ಸಂಬಂಧ ಸರ್ಕಾ­ರದ ಆಶಯದ ವಿರುದ್ಧ ವರದಿ ಕೊಡು­ತ್ತಾ­ರೆಂದು ಯಾರಾದರೂ ನಂಬಲಿಕ್ಕೆ ಸಾಧ್ಯವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.