ರಾಜಾಜಿನಗರ 1ನೇ ಬ್ಲಾಕ್, ಪ್ರಕಾಶನಗರ ವಿಭಾಗಗಳಲ್ಲಿರುವ ಬಹುತೇಕ ಪಾದಚಾರಿ ಮಾರ್ಗಗಳು ರಸ್ತೆ ಬದಿಯ ಚರಂಡಿಗಳ ಮೇಲೆ ಇರುತ್ತವೆ. ಅವುಗಳ ಮೇಲೆ ಕಾಂಕ್ರೀಟ್ ಮೇಲ್ಛಾವಣಿ ಹಾಗೂ ಹಾಸುಬಂಡೆಯ ಹೊದಿಕೆ ಹಾಕಲಾಗಿದೆ. ಆದರೆ, ಅಸಮರ್ಪಕ ಜೋಡಣೆಯಿಂದಾಗಿ ರಾಜಾಜಿನಗರ 1 ಮತ್ತು 2ನೇ ಬ್ಲಾಕ್ಗಳಲ್ಲಿರುವ ಪಾದಚಾರಿ ಮಾರ್ಗದ ಕಲ್ಲುಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಇದರಿಂದಾಗಿ ಇಲ್ಲಿ ಓಡಾಡುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪಾಲಿಕೆ ಸದಸ್ಯರು ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.