ADVERTISEMENT

ಬಡಾವಣೆಯಲ್ಲಿಯೇ ಬಸ್ ನಿಲ್ಲಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2016, 10:24 IST
Last Updated 24 ಮೇ 2016, 10:24 IST

ಜಿಗಣಿ–ಬನ್ನೆರುಘಟ್ಟ ರಸ್ತೆಯ ನಿಸರ್ಗ ಬಡಾವಣೆಯಿಂದ ನಗರದ ಇತರೆಡೆಗೆ ತೆರಳಲು ಸಿಟಿ ಬಸ್‌ಗಳನ್ನೇ ಜನರು ಆಶ್ರಯಿಸಿದ್ದಾರೆ. ಬಸ್‌ ಹತ್ತಲು ಕೊಪ್ಪಗೇಟ್‌ ಅಥವಾ ಹರಪನಹಳ್ಳಿಗೆ ತೆರಳಬೇಕು. ಈ ಎರಡೂ ನಿಲ್ದಾಣಗಳು ಜನವಸತಿ ಪ್ರದೇಶದಿಂದ ದೂರವಿದೆ.

ಎರಡು ಕಡೆ ತೆರಳಲು ಪಾದಚಾರಿ ಮಾರ್ಗವಿಲ್ಲ. ಬೀದಿದೀಪದ ವ್ಯವಸ್ಥೆಯೂ ಇಲ್ಲ. ರಸ್ತೆಯಲ್ಲಿ ಹೋಗುವಾಗ ಯಾವುದೇ ಸುರಕ್ಷತೆ ಇರುವುದಿಲ್ಲ. ವಾಹನ ದಟ್ಟಣೆ ಇರುವುದರಿಂದ ಭಯವಾಗುತ್ತದೆ. ಬಡಾವಣೆ ಸಮೀಪವೇ ಬಸ್‌ ನಿಲುಗಡೆಗೆ ಬಿ.ಎಂ.ಟಿ.ಸಿ. ಅಧಿಕಾರಿಗಳು ಕ್ರಮ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.