ಇತಿಹಾಸದಲ್ಲಿ ನಾನಾ ವಿಧವಾದ ದುರ್ಘಟನೆಗಳು ನಡೆದುಹೋಗಿವೆ. ಬೇರೊಂದು ರೂಪದಲ್ಲಿ ಈಗಲೂ ನಡೆಯುತ್ತಿವೆ. ಆದರೆ ಅವುಗಳನ್ನು ಗಾಢವಾಗಿ ಅರಿಯದೆ; ಮಾನವೀಯ ಸಂಬಂಧಗಳನ್ನು ದಟ್ಟಗೊಳಿಸಿಕೊಳ್ಳಲು ಸಾಧ್ಯವಿಲ್ಲ. ‘ಮರೆತು ಮುನ್ನಡೆಯೋಣ’ ಎಂಬುದೂ ಅರಿವಿನ ಮುಂದುವರಿದ ಭಾಗವಾಗಿಯೇ ಬರಬೇಕಾಗುತ್ತದೆ. ಗಿರೀಶ್ ವಿ.ವಾಘ್ ಅವರು ಅನ್ಯಥಾ ಭಾವಿಸಬಾರದು; ಸೂರ್ಯಪ್ರಕಾಶ್ ಅವರ ಎಲ್ಲಾ ಲೇಖನಗಳಲ್ಲಿ ಪರೋಕ್ಷ
ವಾಗಿ ಎದ್ದುಕಾಣುವುದು ಪ್ರಚೋದನೆಯೇ. ಅಲ್ಲಿ ಸಾಮರಸ್ಯ, ಸಹನಾಮಯತೆ ಎದ್ದುಕಾಣುವುದಿಲ್ಲ. ಆದ್ದರಿಂದ ‘ಅಸ್ಮಿತೆ’ಗಳನ್ನು ಪಕ್ಕಕ್ಕೆ ಸರಿಸಿ ಹೋದಂತೆಲ್ಲ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಆಸ್ವಾದಿಸಲು ಸಾಧ್ಯವಿಲ್ಲ.
-ಶೂದ್ರ ಶ್ರೀನಿವಾಸ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.