ADVERTISEMENT

ಮೃತ್ಯು ಮಾರ್ಗಕ್ಕೆ ಮುಕ್ತಿ ಕಾಣಿಸಿ

ಮದ್ದಿಹಳ್ಳಿ ಪರಮೇಶ್ವರ
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST

ಹೆದ್ದಾರಿ ಸಂಖ್ಯೆ ೭ರಲ್ಲಿ ಬರುವ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಬಿ.ಟಿ.ಎಲ್. ವಿದ್ಯಾ ಸಂಸ್ಥೆ ಅಕ್ಕ ಪಕ್ಕ ಇದ್ದು, ನಾರಾಯಣ ಹೃದಯಾಲಯಕ್ಕೆ ಬರುವ ರೋಗಿಗಳು ಹಾಗೂ ಬಿ.ಟಿ.ಎಲ್ ವಿದ್ಯಾ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಮಾಡುತ್ತಾರೆ.

ವೇಗದಲ್ಲಿ ಬರುವ ವಾಹನಗಳು ವಿದ್ಯಾರ್ಥಿಗಳನ್ನು ಹಾಗೂ ರೋಗಿಗಳನ್ನು ಆಸ್ಪತ್ರೆ ಸೇರುವ ಮೊದಲೇ ಬಲಿ ತೆಗೆದುಕೊಳ್ಳುತ್ತಿವೆ. ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ, ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಸುಗಮವಾಗಿ ರಸ್ತೆ ದಾಟಲು ಅನುವಾಗುವಂತೆ ಅಂಡರ್‌ಪಾಸ್‌ ಅಥವಾ ಸ್ಕೈ ವಾಕ್ ನಿರ್ಮಿಸಿ ಕೊಡಬೇಕೆಂದು ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT