ನಂಬಿಕೆ ಇರಬೇಕು, ಮೂಢನಂಬಿಕೆ ಇರಬಾರದು. ಶಾಸ್ತ್ರ, ಸಂಪ್ರದಾಯ ಇವುಗಳೆಲ್ಲ ಅತಿಯಾಗಬಾರದು. ದೇವರನ್ನು ನಂಬು. ಅದೇ ದೇವರು ಬಂದಿದೆ ಎನ್ನುವ ಮಾನವನನ್ನು ನಂಬಬೇಡ.
ನನ್ನ ಮೇಲೆ ಆ ದೇವರು ಬರುತ್ತೆ. ಈ ದೇವರು ಬರುತ್ತೆ ಎಂದು ನಾಟಕವಾಡಿ ಅಮಾಯಕ ಜನರನ್ನು ತನ್ನತ್ತ ಸೆಳೆದು ಮೋಸ ಮಾಡುತ್ತಿರುವವರು ಬೇಕಾದಷ್ಟು ಜನರು ಇದ್ದಾರೆ.
ದೇವರು ಮನುಷ್ಯನ ಮೇಲೆ ಬರುವ ಹಾಗಿದ್ದರೆ ದೇವಸ್ಥಾನಗಳು, ಗುಡಿ-ಗೋಪುರಗಳೆಲ್ಲ ಮುಚ್ಚಿ ಹೋಗುತ್ತಿದ್ದವು. ಮಾಧ್ಯಮಗಳಲ್ಲಿ ವಾಮಾಚಾರ, ಭಾನಾಮತಿ ಮುಂತಾದ ಆಚಾರಗಳ ಬಗ್ಗೆ ಓದುತ್ತೇವೆ, ನೋಡುತ್ತೇವೆ. ಅವುಗಳ ತಡೆಯುವ, ನಿಲ್ಲಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.