ADVERTISEMENT

ರಾಮನ ಚಾರಿತ್ರ್ಯವಧೆ

ಎಂ.ಆರ್‌.ಸುಬ್ರಹ್ಮಣ್ಯ ಶಾಸ್ತ್ರಿ, ಬೆಂಗಳೂರು
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST

ಭಗವದ್ಗೀತೆ ಕುರಿತು ಈಚೆಗೆ ವಿವಾದಿತ ಹೇಳಿಕೆ ನೀಡಿದ್ದ ಕೆ.ಎಸ್‌.ಭಗವಾನ್‌ ಅವರು ಈಗ ರಾಮನ ಚಾರಿತ್ರ್ಯವಧೆಗೆ (ಪ್ರ.ವಾ., ಮಾರ್ಚ್‌ 30) ಹೊರಟಿದ್ದಾರೆ. ಅವರು ಆಂಗ್ಲ ಭಾಷಾ ಪ್ರಾಧ್ಯಾಪಕರಾದ್ದರಿಂದ ಶೇಕ್‌್ಸಪಿಯರ್‌ನಂತಹ ಪಂಡಿತರ ಕೃತಿಗಳ ವಿಮರ್ಶೆಯಲ್ಲಿ ತೊಡಗಲಿ. ‘ವಾಲ್ಮೀಕಿ ರಾಮಾಯಣ’ವನ್ನು ಓದಿ ಸಂಸ್ಕೃತ ಪಂಡಿತರೊಂದಿಗೆ ಚರ್ಚಿಸಿ, ರಾಮನ ಬಗ್ಗೆ ನಿಜ ಅರಿಯಲು ಯತ್ನಿಸಲಿ. ಅದು ಬಿಟ್ಟು ಜನಸಾಮಾನ್ಯರ ನಂಬಿಕೆ ಮತ್ತು ಭಾವನೆಗಳಿಗೆ ಹಾನಿಮಾಡುತ್ತಾ, ಅದರಿಂದ ಪುಕ್ಕಟೆ ಪ್ರಚಾರ ಗಳಿಸಲು ಹೊರಡುವುದು ಸಲ್ಲದು. ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.