ವಿಶಾಲಾಕ್ಷಿ ಶರ್ಮಾ ಅವರು ಬರೆದ ‘ಶಾಲಾ ಆವರಣ ಮಳಿಗೆ ಆಗಿದ್ದು ಹೇಗೆ’ (ಪ್ರ.ವಾ., ಮೇ 16) ಲೇಖನ ಬಹಳ ಅರ್ಥಪೂರ್ಣವಾಗಿತ್ತು.
ನಾವೆಲ್ಲ ಚಿಕ್ಕವರಾಗಿದ್ದ ದಿನಗಳಲ್ಲಿ ಬಹಳ ಖುಷಿಯಿಂದ ಶಾಲಾ ಶಿಕ್ಷಕರು ಹೇಳಿದಷ್ಟು ಮಾತ್ರ ಪುಸ್ತಕಗಳನ್ನು ಖರೀದಿಸುತ್ತಿದ್ದೆವು. ಅಪ್ಪನ ಹತ್ತಿರ ಹತ್ತುಬಾರಿ ಕಾಡಿಬೇಡಿ ಹಣ ಪಡೆದು ಅಂಗಡಿಗಳಿಗೆ ಹೋಗಿ ಬಹಳ ಖುಷಿಯಿಂದ ಕೊಂಡುಕೊಳ್ಳುತ್ತಿದ್ದೆವು.
ಆದರೆ ಇಂದು ಮಕ್ಕಳು ಯಾವ್ಯಾವ ಪುಸ್ತಕ ಖರೀದಿಸಬೇಕು ಎಂದು ನಿರ್ಧರಿಸುವುದು ಮಕ್ಕಳಿಗೆ ಕಲಿಸುವ ಶಿಕ್ಷಕರಲ್ಲ, ಬದಲಾಗಿ ವ್ಯಾಪಾರಿ ಮನಸ್ಸಿನ ಶಾಲಾ ಆಡಳಿತ ಮಂಡಳಿಯವರು. ಪಾಲಕರು ಈ ದಿಕ್ಕಿನಲ್ಲೂ ಚಿಂತನೆ ಮಾಡಬೇಕು.
-ರಿಯಾಝ್ ಅಹ್ಮದ್, ರೋಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.