ADVERTISEMENT

ಸವಾಲಿನ ಹಾದಿ

ಪ್ರಕಾಶ್‌ ಎಚ್‌.ಬಿ., ಬೆಂಗಳೂರು
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಇತ್ತೀಚೆಗೆ ಚಿಕ್ಕಮಗಳೂರಿಗೆ ಸ್ವಂತ ವಾಹನದಲ್ಲಿ ಪ್ರವಾಸ ಹೋಗಿದ್ದೆವು. ಜಿಲ್ಲಾ ಕೇಂದ್ರದಿಂದ ಮುಳ್ಳಯ್ಯನ ಗಿರಿ ಬೆಟ್ಟಕ್ಕೆ ಹೋಗುವ ದಾರಿ ಸಾಮಾನ್ಯ ಚಾಲಕರಿಗೆ ಸವಾಲೆನಿಸುವಂತಿತ್ತು. ಹಳ್ಳಕೊಳ್ಳಗಳಲ್ಲಿ ವಾಹನ ಓಡಿಸುವುದು ಅನಿವಾರ್ಯವಾಗಿತ್ತು. ಮುಳ್ಳಯ್ಯನ ಗಿರಿಯಿಂದ ಪ್ರಸಿದ್ಧ ದತ್ತಪೀಠದ ಮಾರ್ಗದಲ್ಲಂತೂ ವಾಹನ ಓಡಿಸಲು ಸಾಧ್ಯವೇ ಆಗದೆ ತಳ್ಳುವ ಪರಿಸ್ಥಿತಿ ಎದುರಾಯಿತು.

ನಮ್ಮ ಪರದಾಟ ಹೇಳತೀರದಂತಿತ್ತು. ಈ ಭಾಗದ ಪ್ರವಾಸಿ ತಾಣಗಳ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಜೊತೆಗೆ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿ ಉತ್ತಮ ಆದಾಯವನ್ನೂ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.