ADVERTISEMENT

ಸೇವೆ ತ್ವರಿತವಾಗಬೇಕು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST

ನಾಡಕಚೇರಿಗಳಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳಿಗಾಗಿ ಬರುವ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಹಳಷ್ಟು ಕಡೆ ಕಚೇರಿಯಲ್ಲಿ ಒಬ್ಬರೇ ಕೆಲಸ ನಿಭಾಯಿಸಬೇಕಾದ ಪರಿಸ್ಥಿತಿ ಇದೆ.

ಇದರಿಂದಾಗಿ ಜನಸಾಮಾನ್ಯರು ಬಹಳ ಹೊತ್ತು ನಾಡ ಕಚೇರಿಯಲ್ಲಿ ಕಾಯಬೇಕಾಗುತ್ತದೆ. ಇಂಥ ಕೇಂದ್ರಗಳಲ್ಲಿ ನೌಕರರ ಸಂಖ್ಯೆಯನ್ನು ಹೆಚ್ಚಿಸಿದರೆ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು.

ಅಂತರ್ಜಾಲದ ಸರ್ವರ್ ಸಂಪರ್ಕ ಮತ್ತೆ ಮತ್ತೆ ಕಡಿತಗೊಳ್ಳುವುದು ಕೂಡ ನಿಧಾನಗತಿಯ ಸೇವೆಗೆ ಕಾರಣವಾಗಿದೆ. ಸಂಬಂಧಪಟ್ಟವರು ಇಂತಹ ನ್ಯೂನತೆಗಳನ್ನು ಸರಿಪಡಿಸಿ ಜನರಿಗೆ ತ್ವರಿತ ಸೇವೆ ಒದಗಿಸಬೇಕಿದೆ.
-ನಾಗರಾಜ್ ಬಿ.ಅರ್., ಸಾದರಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.