ADVERTISEMENT

ಸ್ವಾಗತಾರ್ಹ ಚಿಂತನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST

‘ಏಕರೂಪ ನಾಗರಿಕ ಸಂಹಿತೆಗೆ ವೇದಿಕೆ ಸಿದ್ಧ’ ಲೇಖನದ ಮೂಲಕ ಕ್ಯಾಪ್ಟನ್ ಗೋಪಿನಾಥ್‌ ಅವರು ವ್ಯಕ್ತಪಡಿಸಿದ ಚಿಂತನೆ ಸ್ವಾಗತಾರ್ಹ (ಪ್ರ.ವಾ., ಸೆ. 3). ಭಾರತದಲ್ಲಿ ವಾಸಿಸುತ್ತಿರುವ ಇಸ್ಲಾಂ, ಕ್ರೈಸ್ತ, ಬೌದ್ಧ, ಹಿಂದೂ, ಸಿಖ್... ಎಲ್ಲಾನಾಗರಿಕರಿಗೆ ಸಂವಿಧಾನವು ಏಕರೂಪ ಹಕ್ಕುಗಳನ್ನು
ಕಲ್ಪಿಸಿದೆ. ಸಂವಿಧಾನವನ್ನು, ಭಾರತದಲ್ಲಿರುವ ಸರ್ವಧರ್ಮೀಯರೂ ಗೌರವಿಸಬೇಕು ಹಾಗೂ ಅನುಸರಿಸಬೇಕು. ಹೀಗಿದ್ದೂ, ಮೌಲ್ವಿಗಳು, ವಿವಾಹ ಹಾಗೂ ತಲಾಖ್ ವಿಷಯಗಳಲ್ಲಿ ಸ್ವತಂತ್ರ ನ್ಯಾಯಾಲಯಗಳಂತೆ ಆದೇಶ ಹೊರಡಿಸುತ್ತಿರುವುದು ಸಂವಿಧಾನಕ್ಕೆ ಎಸಗುವ ಅಪಚಾರವಲ್ಲವೇ?

ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT