ADVERTISEMENT

ಹಣದ ಲೆಕ್ಕಾಚಾರ...

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST

ಶಿಕ್ಷಕರ ಕೊರತೆಯೇ ಸರ್ಕಾರಿ ಶಾಲೆಗಳ ಅನೇಕ  ಸಮಸ್ಯೆಗಳಿಗೆ ಕಾರಣ. ಅಗತ್ಯ ಶಿಕ್ಷಕರನ್ನು ನೇಮಿಸಿದ್ದೇ ಆದಲ್ಲಿ ತರಬೇತಿ ಪಡೆದಿರುವವರಿಗೆ ಉದ್ಯೋಗ ದೊರೆಯುತ್ತದೆ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಜನರಲ್ಲಿರುವ ಹಿಂಜರಿಕೆ ದೂರವಾಗುತ್ತದೆ, ಉತ್ತಮ ಫಲಿತಾಂಶದ ನಿರೀಕ್ಷೆ ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಏನೆಲ್ಲ  ಅನುಕೂಲಗಳಿದ್ದರೂ ಶಿಕ್ಷಕರನ್ನು ನೇಮಿಸುವಲ್ಲಿ ಹಣದ ಲೆಕ್ಕಾಚಾರದ ನೆಪ ಒಡ್ಡಿ ಒಂದರ ಮೇಲೊಂದು ಸಮಸ್ಯೆಯನ್ನು ಸರ್ಕಾರ ಮೈಮೇಲೆ ಎಳೆದುಕೊಳ್ಳುವುದು ಅಜ್ಞಾನವೇ ಸರಿ.

ಚನ್ನಪ್ಪ ಬಿ.,ಹೊಸಬೀರವಾಳು,
ಎಚ್.ಡಿ. ಕೋಟೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.