‘ಹಾಕಿ: ವಿಶ್ವ ಕಪ್ ಜಯಕ್ಕೆ ಏಣಿಯಾಗಲಿ ಏಷ್ಯಾ ಕಪ್’ ಸಂಪಾದಕೀಯ (ಪ್ರ.ವಾ., ನ.9) ಓದಿ ಸಂತಸವಾಯಿತು. ಭಾರತೀಯ ವನಿತೆಯರ ಕ್ರೀಡಾ ಸಾಮರ್ಥ್ಯ ಮತ್ತು ಸಾಧನೆಗಳ ಜೊತೆಗೆ ಕ್ರೀಡಾಪಟುಗಳ ವೇದನೆಯನ್ನು ಸಹ ಓದುಗರ ಮತ್ತು ಸರ್ಕಾರದ ಮುಂದೆ ಇಟ್ಟಿರುವುದು ಸಮಯೋಚಿತ.
ಈ ಸಂಪಾದಕೀಯದ ಆಶಯಗಳು ಈಡೇರಿದರೆ ಕ್ರೀಡಾಕ್ಷೇತ್ರ ಸಮೃದ್ಧವಾಗುತ್ತದೆ. ‘ಏಷ್ಯಾ ಕಪ್’ ಗೆಲುವಿನ ರೂವಾರಿ ಸವಿತಾ ಅವರ ಪರಿಶ್ರಮಕ್ಕೆ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಅವರಿಗೆ ಒಂಬತ್ತು ವರ್ಷಗಳಿಂದ ಉದ್ಯೋಗ ಕಲ್ಪಿಸಿಕೊಡದಿರುವುದು ವಿಪರ್ಯಾಸವೇ ಸರಿ. ಮುಂದಿನ ದಿನಗಳಲ್ಲಾದರೂ ಸರ್ಕಾರಗಳು ಇಂಥ ಕ್ರೀಡಾಪಟುಗಳಿಗೆ ಉದ್ಯೋಗ ಕರುಣಿಸಲಿ. ರಾಜ್ಯ ಸರ್ಕಾರಗಳು ಸಾಧಕರಿಗೆ ಬಹುಮಾನಗಳನ್ನು ನೀಡಿ ಉತ್ತೇಜಿಸುವಂತಾಗಲಿ. ನಮ್ಮ ತಂಡ ವಿಶ್ವ ಮಟ್ಟದಲ್ಲಿ ಕಂಗೊಳಿಸಲಿ, ಮತ್ತೊಮ್ಮೆ ಸಾಹಸಿ ವನಿತೆಯರಿಗೆ ಜಯವಾಗಲಿ.
-ಫಿರಾ ರಮೇಶ್ ರಾಥೋಡ್, ಚಿಕ್ಕನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.