ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಸಮ್ಮೇಳನಗಳನ್ನು ಹಲವು ದಶಕಗಳಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ. ಇದು ಸಂತಸದ ವಿಷಯ.
ಸಾಹಿತ್ಯವು ವಾಕ್ಯ, ಪದ, ಅರ್ಥ, ಭಾವ ಮತ್ತು ಅಕ್ಷರಗಳನ್ನು ಅವಲಂಬಿಸಿದೆ. ಈ ಅಕ್ಷರಗಳು ಮರದ ಬೇರುಗಳಿದ್ದಂತೆ. ಮರದ ಬೇರಿಗೆ ನೀರು ಮತ್ತು ಗೊಬ್ಬರ ಹಾಕಿ ಬೆಳೆಸುವಂತೆ ಕನ್ನಡ ಅಕ್ಷರ ಕಲಿಕೆಗೆ ಹೆಚ್ಚು ಗಮನಹರಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಸಾಹಿತ್ಯ ಫಲ ಪುಷ್ಪಗಳಿದ್ದಂತೆ. ಈ ಕನ್ನಡ ಫಲ ಪುಷ್ಪಗಳ ಅಂದ, ಸ್ವಾದ ವರ್ಣನೆಗೆ ನಿಲುಕದ್ದು. ಇದನ್ನು ಅನುಭವಿಸಿ, ಆನಂದಪಡುವ ಕನ್ನಡಿಗರು ಧನ್ಯರು. ಆದರೆ ಈ ‘ಕನ್ನಡವೃಕ್ಷ’ಕ್ಕೆ ‘ಕೀಟ’ಬಾಧೆ ಹೆಚ್ಚಾಗುತ್ತಿದೆ.
ಹೊರರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿ ಕನ್ನಡ ಕಲಿಯದೇ ಇರುವ ಮತ್ತು ಕನ್ನಡ ಭಾಷೆಯನ್ನು ಹಿಂದಕ್ಕೆ ಸರಿಸಿ ಇಂಗ್ಲಿಷ್ ಭಾಷೆ ಕಲಿಸಲು ಹೋರಾಡುತ್ತಿರುವವರ ಬಾಧೆಯನ್ನು ಹೋಗಲಾಡಿಸಬೇಕಾಗಿದೆ. ಅಲ್ಲವೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.