2ಜಿ ಹಗರಣದಲ್ಲಿ ಯಾರೂ ತಪ್ಪಿತಸ್ಥರಲ್ಲ ಎಂಬ ನ್ಯಾಯಾಲಯದ ತೀರ್ಪು ಓದಿ ನನಗೆ ಈ ಕತೆ ನೆನಪಿಗೆ ಬಂದಿತು:
ಒಬ್ಬ ವ್ಯಕ್ತಿಯ ಮೇಲೆ ಸೈಕಲ್ ಕಳ್ಳತನದ ಆರೋಪ ಹೊರಿಸಿ ಅವನ ಮೇಲೆ ಕೇಸ್ ಹಾಕಲಾಯಿತು. ನ್ಯಾಯಾಲಯದಲ್ಲಿ ವಾದ, ವಿವಾದ, ಸಾಕ್ಷ್ಯ ಪರಿಶೀಲನೆ ಎಲ್ಲವೂ ನಡೆದ ಮೇಲೆ ಆರೋಪ ಸಾಬೀತಾಗದಾಯಿತು.
‘ನೀನು ನಿರ್ದೋಷಿ’ ಎಂದು ನ್ಯಾಯಾಧೀಶರು ಆರೋಪಿಗೆ ಹೇಳಿದರು.
‘ಹಾಗಿದ್ದರೆ ಸೈಕಲ್ ನಾನೇ ಇಟ್ಟುಕೊಳ್ಳಬಹುದಾ ಬುದ್ದಿ?’ ಎಂದು ಆರೋಪಿ ಕೇಳಿದ.
ವಿವರಣೆ ಅನಗತ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.