ಬೆಂಗಳೂರು: ‘ಇದು ಒಕ್ಕಲಿಗರ ಸಿಂಬಲ್’ ಎಂದು ತಮ್ಮ ಹೆಗಲ ಮೇಲೆ ಇಳಿಬಿದ್ದಿದ್ದ ಟವೆಲ್ನಿಂದ ಮುಖ ಒರೆಸಿಕೊಂಡರು ಬಿಜೆಪಿ ಶಾಸಕ ಆರ್. ಅಶೋಕ್.
ಇತ್ತೀಚೆಗೆ ಹಮ್ಮಿಕೊಂಡಿದ್ದ ಬಿಜೆಪಿ ಶಾಸಕರು, ಸಂಸದರ ಸಭೆಗೆ ಮುನ್ನ ಸಭಾಂಗಣದ ಹೊರಗೆ ಟವೆಲ್ ಹಾಕಿಕೊಂಡು ಅಶೋಕ್ ಕುಳಿತಿದ್ದರು. ಅದನ್ನು ಕಂಡ ಮಾಧ್ಯಮ ಪ್ರತಿನಿಧಿಗಳು, ‘ಏನ್ ಸಾರ್ ಮುಖ್ಯಮಂತ್ರಿ ಕುರ್ಚಿಗೆ ಹಾಸುವುದಕ್ಕೆ ಟವೆಲ್ಲಾ’ ಎಂದು ಪ್ರಶ್ನಿಸಿದರು.
‘ಹೋ. . ಈಗಿನ ಬಿಜೆಪಿಯಲ್ಲಿ ಅದೆಲ್ಲ ಎಲ್ಲಿ ಆಗ್ತೇತಿ. ಸಿಎಮ್ಮು, ಡಿಸಿಎಮ್ಮು ಎಲ್ಲ ನಮ್ಗೆಲ್ಲಿ ಕೊಡ್ತೀರಿ. ಮೋದಿಜೀ, ಅಮಿತ್ಜೀ ಹೇಳಿದವರು ಸಿಎಮ್ಮು ಆಗ್ತೀರಿ. ನಮ್ದೆಲ್ಲ ಎಲ್ಲಿ ಆಗ್ತೇತಿ’ ಎಂದು ನಗುತ್ತಲೇ ಹೇಳಿದ ಅಶೋಕ್, ‘ಇದು ನಮ್ಮ ಬ್ರಾಂಡ್. . . ಎಚ್ಎಂಟಿ (ಹೆಗಲ ಮೇಲೆ ಟವೆಲ್) ಅಂದರೆ ಗೊತ್ತೈತಲ್ಲಾ. ಕೆಂಪೇಗೌಡ್ರ ಬ್ರಾಂಡ್. . ಅಷ್ಟೆ’ ಎಂದು ಅಲ್ಲಿಂದ ಎದ್ದು ಹೊರಟೇ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.