ADVERTISEMENT

ವಾರಸ್ದಾರಳಾಗಿ ಬರಲಿದ್ದಾಳೆ ಚಿತ್ರಾಲಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ವಾರಸ್ದಾರಳಾಗಿ ಬರಲಿದ್ದಾಳೆ ಚಿತ್ರಾಲಿ
ವಾರಸ್ದಾರಳಾಗಿ ಬರಲಿದ್ದಾಳೆ ಚಿತ್ರಾಲಿ   

‘ಜೀ’ ಕನ್ನಡ ಮನರಂಜನಾ ವಾಹಿನಿ ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ವಾರಸ್ದಾರ’ ಎಂಬ ನೂತನ ಧಾರಾವಾಹಿಯನ್ನು ಆರಂಭಿಸಿತ್ತು.

ಒಂದು ತಿಂಗಳ ಅವಧಿಯಲ್ಲೇ ಅಪಾರ ಸಂಖ್ಯೆಯಲ್ಲಿ ವೀಕ್ಷಕ ಬಳಗವನ್ನು ಸಂಪಾದಿಸಿದ ಈ ಧಾರಾವಾಹಿಯಲ್ಲಿ ಇದೀಗ ಮಹತ್ತರ ಪಾತ್ರವೊಂದರ ಪ್ರವೇಶವಾಗುತ್ತಿದೆ. ಅದು ಡ್ರಾಮಾ ಜೂನಿಯರ್ಸ್‌ ಖ್ಯಾತಿಯ  ಚಿತ್ರಾಲಿ.  ಶಿವಪುರ ಎಂಬ ಪುಟ್ಟಗ್ರಾಮದಲ್ಲಿ ನಡೆದಂಥ ಕಥೆ ಇದಾಗಿದ್ದು ಅಲ್ಲಿನ ಎರಡು ಮನೆತನಗಳ ಕಥೆಯನ್ನು ಈ ಧಾರಾವಾಹಿ ಹೇಳಲಿದೆ. ಸಿಂಹವಂಶದ ಕುಟುಂಬದಲ್ಲಿ ನಡೆಯುವ ಹಲವಾರು ಘಟನೆಗಳನ್ನು ಇಟ್ಟುಕೊಂಡು ಈ ಧಾರಾವಾಹಿಯನ್ನು ರೂಪಿಸಲಾಗಿದೆ. ಸಿಂಹವಂಶದ ಸೊಸೆಯಾದ ಭವಾನಿ ತಾನು ಹೆತ್ತ ಹೆಣ್ಣುಮಗುವನ್ನು ಉಳಿಸಿಕೊಳ್ಳಲು ಹೋರಾಡುವುದೇ ವಾರಸ್ದಾರ ಕಥೆಯ ಮುಖ್ಯ ತಿರುಳಾಗಿದೆ.

ಭವಾನಿಯ ಪಾತ್ರದಲ್ಲಿ ನಟಿ ಯಜ್ಞಾಶೆಟ್ಟಿ ನಟಿಸಿದ್ದಾರೆ.  ಸೋಮವಾರದಿಂದ ಶುಕ್ರವಾರ ದವರೆಗೆ ಪ್ರತಿದಿನ ರಾತ್ರಿ 7.30ರಿಂದ ಜೀ ಕನ್ನಡ ವಾಹಿನಿಯಲ್ಲಿ ವಾರಸ್ದಾರ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.