ADVERTISEMENT

ಆತಂಕವೇ ಲಂಕಾ ಸೋಲಿಗೆ ಕಾರಣ

ಪಿಟಿಐ
Published 23 ಆಗಸ್ಟ್ 2017, 20:07 IST
Last Updated 23 ಆಗಸ್ಟ್ 2017, 20:07 IST
ಆತಂಕವೇ ಲಂಕಾ ಸೋಲಿಗೆ ಕಾರಣ
ಆತಂಕವೇ ಲಂಕಾ ಸೋಲಿಗೆ ಕಾರಣ   

ಪಲ್ಲೆಕೆಲೆ: ಶ್ರೀಲಂಕಾ ತಂಡವು ಸತತ ಸೋಲುಗಳಿಂದಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದೆ. ಆಟಗಾರರಲ್ಲಿ ಗೆಲ್ಲುವ ಛಲವೇ ಇಲ್ಲದಂತಾಗಿದೆ ಎಂದು ಹಿರಿಯ ಕ್ರಿಕೆಟಿಗ ಮಾಹೇಲ ಜಯವರ್ಧನೆ ಹೇಳಿದ್ದಾರೆ.

‘ಸೋಲಿನ ಭೀತಿಯಿಂದಾಗಿಯೇ ತಂಡವು ವೈಫಲ್ಯ ಅನುಭವಿಸುತ್ತಿದೆ. ಎಲ್ಲ ವಿಭಾಗಗಳಲ್ಲೂ ತಂಡ ಕುಸಿತ ಕಂಡಿದೆ. ಹೋರಾಟಕಾರಿ ಮನೋಭಾವ ಬೆಳೆಸಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ’ ಎಂದು ಕ್ರೀಡಾ ವೆಬ್‌ಸೈಟ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ಸೋಲು ತಂಡದ ಆಟಗಾರರಿಗೆ ನಿರಾಸೆ ಉಂಟುಮಾಡಿದೆ. ವಿಶ್ವದ ಅಗ್ರ ಕ್ರಮಾಂಕದ ತಂಡದೊಂದಿಗೆ ಸ್ಪರ್ಧಿಸುವುದು ಆಟಗಾರರಿಗೆ ದೊಡ್ಡ ಸವಾಲಾಗಿತ್ತು ನಿಜ. ಆದರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಹೀನಾಯ ಸೋಲು ಅನುಭವಿಸಬೇಕಾಯಿತು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.