ADVERTISEMENT

ಐಒಬಿಗೆ ಚಾಂಪಿಯನ್‌ ಪಟ್ಟ

ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ಬೆಂಗಳೂರು: ಐಒಬಿ ತಂಡ ಕೆಎಸ್‌ಬಿಎ ವತಿಯಿಂದ ಇಲ್ಲಿ ಮುಕ್ತಾಯಗೊಂಡ ವಿಜಯಾ ಬ್ಯಾಂಕ್‌ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್ ಟೂರ್ನಿ ಯಲ್ಲಿ ಪ್ರಶಸ್ತಿ ಜಯಿಸಿದೆ.ಇಲ್ಲಿನ ಭಾರತ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಫೈನಲ್‌ ಪಂದ್ಯದಲ್ಲಿ ಐಒಬಿ ತಂಡ 63–49ರಲ್ಲಿ ಒಎನ್‌ಜಿಸಿ ತಂಡವನ್ನು ಮಣಿಸಿತು.
ಐಒಬಿ ತಂಡ ವಿರಾಮದ ವೇಳೆಗೆ 26–23ರಲ್ಲಿ ಮುಂದಿತ್ತು. ಆ ಬಳಿಕ ಇನ್ನಷ್ಟು ಪಾಯಿಂಟ್ಸ್‌ ಕಲೆಹಾಕಿ ಗೆಲುವು ಪಡೆಯಿತು.

ಈ ತಂಡದ ಪ್ರಥಮ್‌ ಸಿಂಗ್‌ 25 ಹಾಗೂ ಅಮ್‌ಜೋತ್‌ ಸಿಂಗ್‌ 12 ಪಾಯಿಂಟ್ಸ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಎನ್‌ಜಿಸಿ ತಂಡದ ಮುರಳಿ 12 ಹಾಗೂ ರಿಯಾಜುದ್ದೀನ್‌ 10 ಪಾಯಿಂಟ್ಸ್ ಗಳಿಸಿದರು.

ವಿಜಯ ಬ್ಯಾಂಕ್‌ಗೆ ಮೂರನೇ ಸ್ಥಾನ: ಮೂರನೇ ಸ್ಥಾನ ನಿರ್ಧರಿಸುವ ಪಂದ್ಯದಲ್ಲಿ ವಿಜಯಾ ಬ್ಯಾಂಕ್‌ ತಂಡ 89–75ರಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಮಣಿಸಿತು.

ವಿಜಯೀ ತಂಡ ವಿರಾಮದ ವೇಳೆಗೆ 43–34ರಲ್ಲಿ ಮುನ್ನಡೆ ಹೊಂದಿತ್ತು. ತೀವ್ರ ಪೈಪೋಟಿ ಏರ್ಪಟ್ಟಿದ್ದ ಪಂದ್ಯದಲ್ಲಿ ವಿಜಯಾ ಬ್ಯಾಂಕ್‌ ಪರ ಅನಿಲ್‌ 26, ಅರವಿಂದ್‌ 24 ಪಾಯಿಂಟ್ಸ್ ತಂದಿತ್ತು ಗೆಲುವಿನ ರೂವಾರಿ ಎನಿಸಿಕೊಂಡರು. ಕರ್ನಾಟಕ ರಾಜ್ಯ ತಂಡದ ವಿಸು 24 ಹಾಗೂ ಕ್ಲಿಂಟನ್‌ 11 ಪಾಯಿಂಟ್ಸ್‌ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.