ಬೆಂಗಳೂರು: ಸೌಗಂಧ್ (16 ಪಾಯಿಂಟ್ಸ್) ಉತ್ತಮ ಆಟದ ನೆರವಿನಿಂದ ಮಂಗಳೂರು ಕ್ಲಬ್ ಇಲ್ಲಿ ನಡೆಯುತ್ತಿರುವ ಬಿ.ಎಸ್. ನಾರಾಯಣ ಸ್ಮಾರಕ ಟ್ರೋಫಿ ರಾಜ್ಯ ಸಬ್ ಜೂನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಮಂಗಳೂರು ತಂಡ 38–28ರಲ್ಲಿ ಕೋರಮಂಗಲ ಕ್ಲಬ್ ಎದುರು ಗೆಲುವು ಸಾಧಿಸಿತು. ವಿಜಯೀ ತಂಡ ಮೊದಲ ಎರಡು ಕ್ವಾರ್ಟರ್ ಪೂರ್ಣಗೊಂಡಾಗ 30–18ರಲ್ಲಿ ಮುನ್ನಡೆ ಸಾಧಿಸಿತ್ತು.
ಇದೇ ವಿಭಾಗದ ಇತರ ಪಂದ್ಯಗಳಲ್ಲಿ ವೈಎಂಎಂಎ 46–20ರಲ್ಲಿ ಜೆಎಸ್ಸಿ ಮೇಲೂ, ಬೀಗಲ್ಸ್ 29–19ರಲ್ಲಿ ಡಿವೈಇಎಸ್
ಬೀಗಲ್ಸ್ ವಿರುದ್ಧವೂ, ಯಂಗ್ ಓರಿಯನ್ಸ್ 25–20ರಲ್ಲಿ ಹಲಸೂರು ಸ್ಪೋರ್ಟ್ಸ್ ಕ್ಲಬ್ ಮೇಲೂ ಗೆಲುವು ಸಾಧಿಸಿದವು.
ಬಾಲಕಿಯರ ವಿಭಾಗದ ಎಂಟರ ಘಟ್ಟದ ಪಂದ್ಯಗಳಲ್ಲಿ ರಾಜಮಹಲ್ ಕ್ಲಬ್ 40–20ರಲ್ಲಿ ವಿಮನಾಪುರ ತಂಡದ ಮೇಲೂ, ಯಂಗ್ ಓರಿಯನ್ಸ್ 28–9ರಲ್ಲಿ ಐಬಿಬಿಸಿ ಮೇಲೂ, ಬೀಗಲ್ಸ್ 18–17ರಲ್ಲಿ ಬಿ.ಸಿ.ಬಿ.ಸಿ. ಕ್ಲಬ್ ವಿರುದ್ಧವೂ, ಮೌಂಟ್ಸ್ ಕ್ಲಬ್ 36–19ರಲ್ಲಿ ಅಪ್ಪಯ್ಯ ಕ್ಲಬ್ ಮೇಲೂ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟವು.
ಇಂದು ಸೆಮಿಫೈನಲ್ ಲೀಗ್: ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಸೆಮಿಫೈನಲ್ ಲೀಗ್ ಪಂದ್ಯಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.